‘ದಕ್ಷ’ ಗೆ ಯು/ಎ ಪತ್ರ
Posted date: 01 Wed, Apr 2015 – 08:34:27 AM

ಪ್ರಾದೇಶಿಕ ಸೆನ್ಸಾರ್ ಮಂಡಳಿ ಕನ್ನಡದ ‘ಒನ್ ಶಾಟ್’ ಚಲನಚಿತ್ರ ಎಸ್ ನಾರಾಯಣ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ತಯಾರಾದ ???? ??ನಿಮಾ ಇದೀಗ ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಅರ್ಹತಾ ಪತ್ರವನ್ನು ಪಡೆದುಕೊಂಡಿದೆ. ಸಾಹಸ ಹಾಗೂ ಆತಂಕ ಪಡುವ ಕ್ಷಣಗಳನ್ನು ಗಮನಿಸಿ ‘ಯು/ಎ’ ಅರ್ಹತಾ ಪತ್ರ ಮಂಜೂರು ಮಾಡಲಾಗಿದೆ.

೨ ಘಂಟೆ ೨೦ ನಿಮಿಷದ ಸಿನೆಮಾ ಒಂದೇ ಟೇಕ್ ಅಲ್ಲಿ ‘ದಕ್ಷ’ ರಾತ್ರಿ ೯.೧೦ ರಿಂದ ೧೧.೩೦ (ಏಪ್ರಿಲ್ ೧೭ ೨೦೧೪) ಸಮಯದಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿದೆ. ಛಾಯಾಗ್ರಾಹಕ ರೇಣುಕುಮಾರ್. ಸಾಹಸ ನಿರ್ದೇಶಕ ಕೆ ಡಿ ವೆಂಕಟೇಶ್ ಅವರು ೪೦ಕ್ಕೂ ಹೆಚ್ಚು ತಂಡದೊಂದಿಗೆ ಚಿತ್ರೀಕರಣ ಮಾಡಿದ್ದಾರೆ. ಸಾಹಸದ ಜೊತೆಗೆ, ಮನಮಿಡಿಯುವ ಸನ್ನಿವೇಶಗಳು, ಕಡಕ್ ಮಾತುಗಳು, ಒಂದಷ್ಟು ಹಾಸ್ಯ,ಸಾಮಾಜಿಕ ಕಳಕಳಿ, ಸಮಾಜ ಘಾತುಕ ಸನ್ನಿವೇಶಗಳ ನಿಗ್ರಹ ಸಹ ಚಿತ್ರದ ಪ್ರಮುಖ ಅಂಶಗಳು.
ನಾಯಕ ವಿಜಯ್ ಸೈನಿಕನ ಪಾತ್ರದಲ್ಲಿ, ಪಂಕಜ್ ನಾರಾಯಣ್, ನೇಹ ಪಾಟಿಲ್, ಸುಚಿಂದ್ರಪ್ರಸಾದ್, ರಂಗಾಯಣ ರಘು, ಶೋಬಾರಾಜ್, ಉದಯ್, ಅಭಿಜಿತ್, ಬುಲ್ಲೆಟ್ ಪ್ರಾಕಾಶ್, ಪದ್ಮಜ ರಾವ್ ತಾರಾಗಣದಲ್ಲಿ ಇದ್ದಾರೆ. ಮಾಲೂರ್ ಶ್ರೀ ನಿವಾಸ್ ಅವರು ಒಂದು ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ನಿರ್ದೇಶನ ಎಸ್ ನಾರಾಯಣ್ ಅವರದು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed